Saturday 25 February 2012

ಕನಸಿನ ಮಾತು ( ಮಹಾನ್ ವಿಜ್ಞಾನಿ )



ಕನಸಿನ ಮಾತು
 ( ಮಹಾನ್ ವಿಜ್ಞಾನಿ )
*******************************

ಮನದ ಮಾತಿದು 
ಮರಗಿಡಗಳ ಸದ್ದು
ಮಾತಾಡಿದೆ ನೊಂದು
ಮಲಗಿರುವಾಗ ಬಂದು

ಈ ಜನರು 
ಪ್ರೀತಿಯಲ್ಲಿ ಕಿತ್ತರು 
ನಮ್ಮ ಹೂವು ಹಣ್ಣು
ಹಲವು ಬಗೆಯ ಕಾರ್ಯಕ್ಕೆ
ಬಯಸಿ ಬಳಸಿ , ಬೆಳಸದೇ..
ಮರೆತರು ನಮ್ಮನ್ನು

ಪ್ರಕೃತಿಯ ಸೌಂದರ್ಯ ಹಸಿರೆಂದು
ಹಾಡಿದರು ಹೊಗಳಿದರು ಕಲ್ಪವೃಕ್ಷವೆಂದು
ಕಾಡಿನೊಳು ನಮ್ಮನ್ನು ಕೊಂದು 
ಮಾಡಿದರು ಹಣದ ರಾಶಿಯ ಕದ್ದು ಕದ್ದು
ನುಡಿದಿದೆ ಈ ಜೀವ , ಜೀವಕ್ಕಾಗಿ ಇಂದು ..

ಈ ಲೋಕದ
ಮಹಾನ್ ವಿಜ್ಞಾನಿ 
ಶ್ರೀ ಜಗದೀಶ್ ಚಂದ್ರ ಬೋಸರು
ಮಾಡಿದ ಸಾಧನೆಯನ್ನು ... !!

ಈ ಜಗದೊಡೆಯ
ಮಹಾದೇವ ಶಿವ 
ಶ್ರೀ ಹರಿ , ಜಗದೀಶ , ಬ್ರಹ್ಮ ದೇವರು
ಮಾಡಿದ ಸೃಷ್ಟಿ ನಿಯಮವನ್ನು... !!

ಮರೆತರು ಮನುಷ್ಯರು
ಮನುಷ್ಯರೇ ಮಾಡಿದ
ನೀತಿ ನಿಯಮ , ಸಾಧನೆ 
ಅದೇಕೋ.. ಈಗಿಲ್ಲಿ  ಸ್ವಾರ್ಥ ಬದುಕಿನ ಚಿಂತನೆ.. :)

|| ಪ್ರಶಾಂತ್ ಖಟಾವಕರ್ ||

1 comment:

  1. ಹಲೋ ಸರ್....

    ನಿಮ್ಮ ಬ್ಲಾಗ್ ಸೊಗಸಾಗಿದೆ.. .....ಚೆನ್ನಾಗಿದೆ ನಿಮ್ಮ ಕವನ...ಮನುಷ್ಯನ ಸ್ವಾರ್ಥಕ್ಕೆ ಗಿಡಮರಗಳು ಬಲಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ...ಮನುಷ್ಯ ತನ್ನ ನಾಶವನ್ನು ತಾನೇ ಕರೆದುಕೊಳ್ಳುತಿದ್ದಾನೆ...

    ನನ್ನ ಬ್ಲಾಗ್ ಗೂ ಬನ್ನಿ...
    http://ashokkodlady.blogspot.com/

    ReplyDelete