Tuesday 28 February 2012

ಬರೆದವರು ಯಾರು... ??



ಬರೆದವರು ಯಾರು... ?? 
*****************************

ಚಿತ್ರ ನೋಡಿ ನೋಡಿ ಕವಿತೆ
ಬರೆಯಲು ಮಾಡಿದರೆ ಚಿಂತೆ
ಪದೇ ಪದೇ ಅದೇ ನೆನಪಾಗುತ್ತೆ
ಹಳೆಯ ಕನ್ನಡ ಚಲನಚಿತ್ರಗಳ ಕಥೆ

ಅದೊಂದು ಚಿತ್ರ ವಿಚಿತ್ರ ಜಿಮ್ಮಿಗಲ್ಲು 
ಹಾಡಿದವರು ಡಾ.ವಿಷ್ಣುವರ್ಧನ್ ನೆನಪುಗಳು
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ಚಿತ್ರಗೀತೆಯ ನೆನಪಿನ ಚಿತ್ರಣ ಕಲ್ಪನೆಯ ಕವನ

ಅನ್ನವೆಂದೊಡನೆ ಅಮ್ಮನ ನೆನಪು ಸಹಜ
ಅದಕ್ಕಿಲ್ಲಿ ಹುಲಿಯ ನೆನಪಾಗುದು ಸಹ ನಿಜ
ಕಲಿಯುಗ ಭೀಮ ಚಿತ್ರದ ಟೈಗರ್ ಪ್ರಭಾಕರ್
ಚಿತ್ರದ ಹಾಡಿನ ನೆನಪು ಸಹ ಈ ಚಿತ್ರಕ್ಕೆ ಸೂಪರ್

ತುತ್ತು ಅನ್ನಕ್ಕಾಗಿ ಕಷ್ಟ ಪಟ್ಟ ಚಿನ್ನಾರಿ ಮುತ್ತ
ಪೇಟೆ ಸೇರಿ ಎಲ್ಲಾ ಮರೆತ ಮನದಲ್ಲಿ ಚಿಂತಿಸುತ
ಎಷ್ಟೊಂದ್ ಜನ, ಇಲ್ಲಿ ಯಾರು ನನ್ನೊರು ಅನ್ನುತ
ಪಾದುಕೆಗಳ ಕದಿಯುತ ಓಡುತ, ಪದಕ ಗೆಲ್ಲುತ

ಸಕಲ ಸ್ನೇಹಿತರಿಗೆ ದಾರಿದೀಪ , ಆದನು ಅಪರೂಪ
ತುತ್ತು ಅನ್ನಕ್ಕಾಗಿ ತಾತನ ಮಕ್ಕಳೆಲ್ಲರೂ ಅಲ್ಲಿ  ಕಳ್ಳರು
ಆದರವರು ಓಡಿ ಓಡಿ ಕೊನೆಯಲ್ಲಿ ಎಲ್ಲರ ಮನ ಗೆದ್ದರು
       ಈ ಚಿತ್ರಕ್ಕೆ ಚಲನಚಿತ್ರಗಳ ನೆನಪಿನ ಮುಗಿಯದ ಕವನ .. :)

ಬರೆದವರು ಯಾರು... ??
|| ಪ್ರಶಾಂತ್ ಖಟಾವಕರ್ ||

No comments:

Post a Comment